Wednesday 3 August 2011

ಒಂದು ಸಂತಸದ ಮಿಂಚು: ಹನುಮಂತ್ ಹಲಿಗೇರಿಗೆ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ 
 
ಹನುಮಂತ್ ಹಲಿಗೇರಿ
ನಮ್ಮ ಬಳಗದ ಗೆಳೆಯ , ಕಥೆಗಾರ ಹನುಮಂತ್ ಹಲಿಗೇರಿ ಯವರ 'ಕತ್ತಲ ಗರ್ಭದ ಮಿಂಚು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ ಬೀಳಗಿ ಘಟಕದ ದತ್ತಿ ಪ್ರಶಸ್ತಿ ಲಭಿಸಿದೆ. ಚೈತ್ರರಶ್ಮಿ ಕಥಾಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಬಳಗಕ್ಕೆ ಪರಿಚಿತರಾದ ಹನುಮಂತ್ ಮೂಲತಃ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದವರು. ಬಿ .ಎ ಓದುತ್ತಿರುವಾಗಲೇ ಗ್ರಾಮೀಣೋದ್ಧಾರದ ಹುಚ್ಚು ಹತ್ತಿಸಿಕೊಂಡು ಊರೂರು ಅಲೆದವರು. ಧಾರವಾಡ ದ ಕರ್ನಾಟಕ ವಿವಿ ಯಿಂದ 'ಐ.ಎಲ್.ಆರ್.ಡಿ' ಎಂಬ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಪದವಿ ಪಡೆದು ನಂತರ ಗಾಂಧೀಜಿಯವರ ನೇರ ಅನುಯಾಯಿ ಮಣಿಭಾಯಿ ದೇಸಾಯಿಯವರ 'ಭೈಫ್' ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ 'ವಾರ್ತಾಭಾರತಿ' ಪತ್ರಿಕೆಯಲ್ಲಿ ಉಪಸಂಪಾದಕರು. 

ಬರವಣಿಗೆಯ ಹೆಜ್ಜೆಗುರುತುಗಳು:
  • ೨೦೦೮ರಲ್ಲಿ  "ದೇವರ ಹೆಸರಲ್ಲಿ" ನಾಟಕವು ಕನ್ನಡ ಮತ್ತು ಸಂಸ್ಕೃತಿ  ಇಲಾಖೆಯಿಂದ ಸಹಾಯಧನವನ್ನು ಪಡೆದುಕೊಂಡು ಪ್ರದರ್ಶನಗೊಂಡಿದೆ.
  •  ೨೦೦೮ರ  "ಮೊಹರಂ" ಕತೆ ವಿಕ್ರಾಂತ್ ಕರ್ನಾಟಕ ಪತ್ರಿಕೆಯ ಗಾಂಧೀ ಕಥಾಸ್ಪರ್ಧೆಯಲ್ಲಿ  ಆಯ್ಕೆಯಾಗಿ ಪ್ರಕಟಗೊಂಡಿದೆ. ೨೦೧೦ರ ಹೂಸದಿಗಂತದ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ನನ್ನ ಕತ್ತಲೆಯೂಳಗಿನ "ಮಿಣುಕು' ದ್ವೀತಿಯ ಬಹುಮಾನ
  • ೨೦೧೦ ರ ಚೈತ್ರರಶ್ಮಿ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ.  
  • 'ಊರು ಸುಟ್ಟರೂ ಹನುಮಪ್ಪ ಹೊರಗ' ಕಥೆಗೆ ಇಂದಿರಾ ಗೋವಿಂದರಾವ್ ಸ್ಮಾರಕ ಕಥಾಸ್ಪರ್ಧೆಯಲ್ಲಿ ಪ್ರಥಮ ೫೦೦೦ ರೂ ನಗದು ಬಹುಮಾನ.
  • 'ಕತ್ತಲ ಗರ್ಭದ ಮಿಂಚು' ಚೊಚ್ಚಲ ಕಥಾ ಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಧನದೊಂದಿಗೆ ಪ್ರಕಟ-೨೦೧೧ 
  • 'ಕತ್ತಲ ಗರ್ಭದ ಮಿಂಚು' ಕಥಾಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಬೀಳಗಿ ಘಟಕದ ದತ್ತಿ ಪ್ರಶಸ್ತಿ.
ಗ್ರಾಮೀಣ ಹಾಗೂ ಬಡತನದ ಹಿನ್ನೆಲೆಯಿಂದ ಬಂದು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಭರವಸೆ ಹುಟ್ಟಿಸಿರುವ ಗ್ರಾಮೀಣ ಪ್ರತಿಭಾವಂತ ಗೆಳೆಯ ಹನುಮಂತ್ ಗೆ ಚೈತ್ರರಶ್ಮಿ ಬಳಗದ ಶುಭಹಾರೈಕೆಗಳು. ಅವರ ಸಾಹಿತ್ಯದ ಅರಿವು, ಹರವು ಇನ್ನಷ್ಟು ವಿಸ್ತರಿಸಲಿ. ಅಭಿನಂದನೆಗಳು ಹನುಮಂತ್.


No comments:

Post a Comment