Wednesday 3 August 2011

ಗೆಳೆಯರು ಬರೆಯುತ್ತಿದ್ದಾರೆ : ಅವರಿನ್ನೂ ಬೆಳೆಯಲಿ

ನಮ್ಮ ಚೈತ್ರರಶ್ಮಿಯ ಕನಸಿರುವುದೇ ಗ್ರಾಮೀಣ ಹಾಗೂ    
ಅವಕಾಶ ವಂಚಿತ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರಲ್ಲಿ ಹಾಗೂ ಅದರ ಯಶಸ್ಸಿರುವುದೇ ಆ ಎಲ್ಲ ಪ್ರತಿಭಾವಂತರ ಯಶಸ್ಸುಗಳಲ್ಲಿ : ಹಾಗಂತ ನಾನು ನಂಬಿದ್ದೇನೆ. ಬಳಗದ ಗೆಳೆಯರು ಅಂತಲ್ಲ , ನನ್ನ ಸುತ್ತಮುತ್ತಲಿನ ಯಾರೇ ಆಗಲಿ, ಯಾವುದೇ ಕ್ಷೇತ್ರದಲ್ಲಾಗಲಿ ಸಾಧನೆ ಮಾಡಿದಾಗ ನಾನು ಪ್ರಾಮಾಣಿಕವಾಗಿ ಖುಷಿಪಟ್ಟಿದ್ದೇನೆ, ಮಾತ್ರವಲ್ಲ ಆ ಸಂತಸವನ್ನು ನನ್ನ ಸಂಪರ್ಕದ ಬಹುತೇಕರಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದೇನೆ. ಅದರ ಉದ್ದೇಶ  ಆ ಮೂಲಕ ಅವರೆಲ್ಲರಿಗೆ ಪ್ರೋತ್ಸಾಹ ಸಿಗಲಿ, ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದಷ್ಟೇ. ಎರಡೇ ಸಾಲಿನ ಪ್ರೋತ್ಸಾಹದ ಮಾತು ಅದೆಷ್ಟು ಶಕ್ತಿ ತುಂಬಬಲ್ಲುದು ಎಂಬ ಅರಿವಿದೆ ನನಗೆ. ಚೈತ್ರರಶ್ಮಿಯ ಆರಂಭದ ದಿನಗಳನ್ನು ನೆನಪಿಸಿಕೊಂಡರೆ ಬಳಗಕ್ಕೆ ಬಂದ ಗೆಳೆಯರು ತುಂಬಾ ಬರೆಯುತ್ತಿದ್ದಾರೆ, ಬೆಳೆಯುತ್ತಿದ್ದಾರೆ. ಹೌದು ಅವರು ಇನ್ನಷ್ಟು ಬರೆಯಲಿ, ಮತ್ತಷ್ಟು ಬೆಳೆಯಲಿ. ಎಲ್ಲ ಗ್ರಾಮೀಣ ಪ್ರತಿಭಾವಂತರ ನಗುವಿನಲ್ಲಿ ನಮ್ಮ ಚೈತ್ರರಶ್ಮಿಯ ಗೆಲುವಿದೆ.

ಬಳಗದ ಗೆಳೆಯರ ಒಂದಷ್ಟು ಇತ್ತೀಚಿನ ಪ್ರಕಟಗೊಂಡ ಲೇಖನಗಳು:

  • ನಮ್ಮ ಬಳಗದ ಬರಹಗಾರ,  ವಕ್ರೋಕ್ತಿ  ಚತುರ, ಕನ್ನಡಪ್ರಭ ದಿನಪತ್ರಿಕೆಯ 'ಪದಪದರ ' ಅಂಕಣದ ಅಂಕಣಕಾರ ವಿಶ್ವನಾಥ ಸುಂಕಸಾಳ ರ ಲೇಖನ ಆಗಸ್ಟ್ ೩ ರ ಕನ್ನಡಪ್ರಭ ದಿನಪತ್ರಿಕೆಯಲ್ಲಿ : 
  • http://www.kannadaprabha.com/pdf/epaper.asp?pdfdate=8/3/2011  

ವಿಶ್ವ ಸುಂಕಸಾಳ ಲೇಖನ-ಕನ್ನಡಪ್ರಭ-ಆಗಸ್ಟ್ 3
  •  ನಮ್ಮ ಚೈತ್ರರಶ್ಮಿ ಬಳಗದ ಸಂಚಾಲಕರು ಹಾಗೂ ಗೋವಾ ಕನ್ನಡ ಜನನುಡಿ ಪತ್ರಿಕೆಯ ಸಂಪಾದಕರಾದ ಶ್ರೀ ಮಹಾಬಲ ಭಟ್ ರವರ ಲೇಖನ ಹೊಸದಿಗಂತ ಪತ್ರಿಕೆಯಲ್ಲಿ :

ಮಹಾಬಲ ಭಟ್ ಲೇಖನ-ಹೊಸದಿಗಂತ 
  •  ನಮ್ಮ ಬಳಗದ ಬರಹಗಾರ, ಅಮೇರಿಕ ಕನ್ನಡ ಒಕ್ಕೂಟ - 'ಅಕ್ಕ' ಕಥಾಸ್ಪರ್ಧೆ ಪ್ರಥಮ ಬಹುಮಾನ ವಿಜೇತ ಕಥೆಗಾರ ನವೀನ ಭಟ್ ಗಂಗೋತ್ರಿ ಯವರ ಕಥೆ ಕನ್ನಡಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭದಲ್ಲಿ :


  • ಕನ್ನಡಪ್ರಭ 'ಪ್ರೇಮಪತ್ರ ಸ್ಪರ್ಧೆ' ಯಲ್ಲಿ ಬಳಗದ ಶ್ರೀಮತಿ ರೇವತಿ ಶೆಟ್ಟಿ ಹಾಗೂ ಶ್ರೀಮತಿ ಕಮಲ.ಎಂ (ಸುಧಾ ಹೆಗಡೆ) ಅವರ ಬರಹಗಳು ಅಂತಿಮ ೨೫ ರಲ್ಲಿ ಆಯ್ಕೆ. ಸಾಹಿತ್ಯ ಪ್ರಕಾಶನ ಹೊರತರುವ ಪುಸ್ತಕದಲ್ಲಿ ಇವರ ಪ್ರೇಮಪತ್ರಗಳು ಪ್ರಕಟವಾಗಲಿವೆ. ಕನ್ನಡಪ್ರಭ -ಸಾಪ್ತಾಹಿಕದಲ್ಲಿ ಪ್ರಕಟಗೊಂಡ ರೇವತಿ ಅವರ ಬರಹ.
ರೇವತಿ ಶೆಟ್ಟಿ ಅವರ ಬರಹ -ಕನ್ನಡಪ್ರಭ ಸಾಪ್ತಾಹಿಕ
 ಈ ಎಲ್ಲ ಗೆಳೆಯರಿಗೆ ಅಭಿನಂದನೆಗಳು. ಮತ್ತೆ ಮತ್ತೆ ಇಂತಹ ಅಭಿನಂದನೆಗಳನ್ನು ಹಂಚಿಕೊಳ್ಳುವ ಕಾಲ ಬರುತ್ತಲೇ ಇರಲಿ.
  

No comments:

Post a Comment